ಬೈಂದೂರು ತಾಲ್ಲೂಕಿನ ನಾಡ ಗುಡ್ಡೆ ಅಂಗಡಿ ಸರಕಾರಿ ಆಸ್ಪತ್ರೆ ಹತ್ತಿರದ ರಸ್ತೆಯಲ್ಲಿ ಗುಂಡಿ ಬಿದ್ದು ವಾಹನಗಳ ಸಂಚಾರಕ್ಕೆ ಅನಾನುಕೂಲವಾಗಿತ್ತು. ದ್ವಿಚಕ್ರ ವಾಹನ ಸವಾರರು ವಾಹನ ಓಡಿಸಲು ಕಷ್ಠ ಪಡುತ್ತಿದ್ದರು.

ಇದನ್ನು ಗಮನಿಸಿದ ಶ್ರೀ ಧರ್ಮಸ್ಥಳ ಶೌರ್ಯ ತಂಡ ಪಡುಕೋಣೆಯ ಸದಸ್ಯರು ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ನಿರ್ಧರಿಸಿ ಶ್ರಮದಾನ ನಡೆಸಿರುತ್ತಾರೆ.
ಗುಂಡಿಗಳನ್ನು ಗುರುತಿಸಿ ಮಣ್ಣು ತುಂಬಿ ಮಟ್ಟ ಮಾಡಿರುತ್ತಾರೆ. ರಸ್ತೆಯ ಬದಿಯಲ್ಲಿನ ಚರಂಡಿಗಳಲ್ಲಿ ಕಸಕಡ್ಡಿಗಳನ್ನು ತೆರವು ಮಾಡಿರುತ್ತಾರೆ.

ಶೌರ್ಯ ಘಟಕದ ಸದಸ್ಯರಾದ ಸವಿತಾ, ವೀಣಾ ಆಚಾರ್ಯ, ನಾಗರತ್ನ ಸಿ ಪೂಜಾರಿ, ಅಶೋಕ, ರಮೇಶ, ವಿಶಾಲಾಕ್ಷಿ, ಸಂತೋಷ, ಉದಯ, ಗಣೇಶ್, ವಿಘ್ನೇಶ, ವೀಣಾ ಶ್ರಮದಾನದಲ್ಲಿ ಪಾಲ್ಗೊಂಡರು.